ಸಾರಿಗೆ ಮುಷ್ಕರ: ಕರ್ತವ್ಯ ನಿರ್ವಹಿಸುತ್ತಿದ್ದ ಸಾರಿಗೆ ನೌಕರ ಸಾವು | Janata news
ಬೀದರ್ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕಕರು ನಡೆಸುತ್ತಿರುವ ಮುಷ್ಕರ ಮುಂದುವರಿದಿದ್ದು, ಇತ್ತ ಮುಷ್ಕರ ನಡುವೆಯೇ ಸೇವೆ ಸಲ್ಲಿಸುತ್ತಿದ್ದ ಸಾರಿಗೆ ನೌಕರ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ಬೀದರನ್ನ ಔರಾದ್ ಸಾರಿಗೆ ಘಟಕದಲ್ಲಿ ಚಾಲಕನಾಗಿದ್ದ ಮಕ್ಬುಲ್ (48) ಮೃತ ದುರ್ದೈವಿ.
ಮಕಬೂಲ್ ಬೆಳಗ್ಗೆ ಮಹಾರಾಷ್ಟ್ರದ ನಾಂದೇಡಗೆ ಕೆಲಸಕ್ಕೆ ತೆರಳಿದ್ದರು. ಒತ್ತಡದ ನಡುವೆ ಬಸ್ ಚಾಲನೆ ಮಾಡುತ್ತಿದ್ದ ಮಕಬೂಲ್ಗೆ ದೇಗಲೂರ ಸಮೀಪ ಎದೆನೋವು ಶುರುವಾಗಿದೆ. ತಕ್ಷಣ ಬಸ್ ಅನ್ನು ರಸ್ತೆಪಕ್ಕ ನಿಲ್ಲಿಸಿದ್ದಾರೆ. ಬಸ್ನಲ್ಲಿ ಹೃದಯಾಘಾತವಾಗಿ ಚಾಲಕ ಕೊನೆಯುಸಿರೆಳೆದರು.
English summary :Bidar